ಬೇಲೂರು: ಸಿಬ್ಬಂದಿಯೊಬ್ಬರ ಪುತ್ರಿಯ ಭಾವಚಿತ್ರ ಮತ್ತು ಅವಹೇಳನಕಾರಿ ಸಂದೇಶವನ್ನು ವಾಟ್ಸ್ಆ್ಯಪ್ನಲ್ಲಿ ಹಾಕಿದ ಆರೋಪದ ಮೇಲೆ ಇಲ್ಲಿನ ವೈಡಿಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಜಯಣ್ಣಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಪ್ರಾಂಶುಪಾಲರ ವಿರುದ್ಧ ಬೇಲೂರು ಪೊಲೀಸ್ ಠಾಣೆಗೆ ಸಿಬ್ಬಂದಿ ದೂರು ನೀಡಿದ್ದರು. ‘ನನ್ನ ಕುಟುಂಬದ ತೇಜೋವಧೆ ಉದ್ದೇಶದಿಂದಲೇ ಇದನ್ನು ಶೇರ್ ಮಾಡಿದ್ದಾರೆ. ಕ್ರಮ ಜರುಗಿಸಬೇಕು’ ಎಂದು ಕೋರಿದ್ದರು.
ದೂರು ನೀಡಿದ ಸಿಬ್ಬಂದಿ ಜೊತೆಗೆ ಪ್ರಾಂಶುಪಾಲ ಜಯಣ್ಣಗೌಡ ಅವರಿಗೆ ಭಿನ್ನಾಭಿಪ್ರಾಯವಿತ್ತು. ಇದೇ ಕಾರಣದಿಂದ ಶೇರ್ ಮಾಡಿರಬಹುದು ಎನ್ನಲಾಗಿದೆ.