ವಿಜಯಪುರ: ದೇವನಹಳ್ಳಿ ಸೂಲಿಬೆಲೆ ನಡುವಿನ ಮುಖ್ಯಹೆದ್ದಾರಿಯ ನಡುವಿನ ಬಾಲೇಪುರದ ಬಳಿ ನಿರ್ಮಿಸಿದ ರಸ್ತೆ ಉಬ್ಬಿಗೆ ಪಟ್ಟಿಗಳನ್ನು ಅಳವಡಿಸಬೇಕು ಎಂದು ಸ್ಥಳೀಯರಾದ ರಾಮಮೂರ್ತಿ, ಅಶೋಕ್, ಆಂಜನಮೂರ್ತಿ ಒತ್ತಾಯಿಸಿದರು.
ಹೆದ್ದಾರಿಯಲ್ಲಿ ದೇವನಹಳ್ಳಿ ಗಡಿಯ ಬಳಿ ನಡುರಸ್ತೆಯಲ್ಲಿ ನಿರ್ಮಿಸಿರುವ ರಸ್ತೆ ಉಬ್ಬು ಗುರುತಿಸಲಾರದೆ ವಾಹನ ಸವಾರರು ಅಪಘಾತಗಳಿಗೆ ಒಳಗಾಗುತ್ತಿದ್ದಾರೆ ಎಂದು ದೂರಿದರು.
ರಸ್ತೆಯಲ್ಲಿ ಉಬ್ಬಿಗೆ ಬಿಳಿ ಪೇಂಟ್ನಿಂದ ಪಟ್ಟಿಗಳನ್ನು ಬಳಿಯಬೇಕು. ಹೆದ್ದಾರಿಯಲ್ಲಿ ಲೊಕೋಪಯೋಗಿ ಇಲಾಖೆಯಿಂದ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.