ಭದ್ರಾ ಕಾಡಾ ಸಮಿತಿ ಆದೇಶದ ಮೇರೆಗೆ ಹತ್ತು ದಿನ ನೀರು ಬಿಡಲಾಗುತ್ತಿದೆ. ಆದರೆ ನಾಲಾ ಕೊನೆಯ ಭಾಗದ ಹಳ್ಳಿಗಳಾದ ನಾಗಸಮುದ್ರ, ಸನ್ಯಾಸಿಕೊಡಮಗ್ಗಿ, ಮಂಗೋಟೆ, ಸಿದ್ಲೀಪುರ, ಅಗಸನಹಳ್ಳಿ, ಎಮ್ಮೆಹಟ್ಟಿ, ದಾಸರಕಲ್ಲಹಳ್ಳಿ, ಮೈದೊಳಲು, ಮಲ್ಲಾಪುರ ವ್ಯಾಪ್ತಿಯ ಹಳ್ಳಿಗಳಿಗೆ ನೀರು ತಲುಪದೇ ಇರುವುದರಿಂದ 1,100 ಕ್ಯುಸೆಕ್ ನೀರನ್ನು ಮಧ್ಯರಾತ್ರಿಯಿಂದಲೇ ಹರಿಸಬೇಕು ಎಂದು ಆಗ್ರಹಿಸಿದರು.