ವಿರೂಪಾಕ್ಷಿಪುರದ ನಿವಾಸಿಗಳಾದ ಗಾಯತ್ರಿ (35), ಅವರ ಪುತ್ರಿ ಪೂರ್ಣಿಮಾ (10), ಪಕ್ಕದ ಮನೆಯವರಾದ ಅನು (14) ಹಾಗೂ ನಮ್ರತಾ (11) ಮೃತರು. ಅವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಟ್ಟೆ ತೊಳೆಯುತ್ತಿದ್ದ ವೇಳೆ ಸೀರೆಯು ಕೆರೆಯ ನೀರಿಗೆ ಬಿದ್ದಿದ್ದು, ಅದನ್ನು ಎತ್ತಿಕೊಳ್ಳಲು ಹೋಗಿ ಗಾಯತ್ರಿ ನೀರಿನಲ್ಲಿ ಮುಳುಗಿದರು. ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದ ಮೂವರೂ ನೀರುಪಾಲಾದರು ಎಂದು ಪೊಲೀಸರು ತಿಳಿಸಿದರು.