ರಾತ್ರಿ 12.30ರ ಸುಮಾರಿಗೆ ಕಾರಿನ (ಕೆಎ 04 ಎಂಜೆ 0576) ಚಾಲಕ ಮಲ್ಲೇಶ್ವರದಿಂದ ನವರಂಗ್ ವೃತ್ತದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಚಾಲಕ, ವಾಹನವನ್ನು ಮೇಲ್ಸೇತುವೆಯ ತಡೆಗೋಡೆಗೆ ಗುದ್ದಿಸಿದ್ದಾರೆ. ತಡೆಗೋಡೆಯ ತುದಿಯಲ್ಲಿ ಕಾರು ನಿಂತುಕೊಂಡಿತ್ತು. ಮತ್ತಷ್ಟು ರಭಸದಿಂದ ತಡೆಗೋಡೆಗೆ ಗುದ್ದಿದ್ದರೆ ಮೇಲ್ಸೇತುವೆಯಿಂದ ಕೆಳಗೆ ಬೀಳುವ ಸಾಧ್ಯತೆ ಇತ್ತು ಎಂದು ಮಲ್ಲೇಶ್ವರ ಸಂಚಾರ ಪೊಲೀಸರು ತಿಳಿಸಿದರು.