‘ಅನುಮತಿ ನೀಡಲು ಗುರುಮೂರ್ತಿ ₹ 15 ಸಾವಿರ ಲಂಚದ ಬೇಡಿಕೆ ಇರಿಸಿದ್ದರು. ನಂತರ ₹ 10 ಸಾವಿರಕ್ಕೆ ಒಪ್ಪಿಕೊಂಡಿದ್ದರು. ಮುಂಗಡವಾಗಿ ₹1 ಸಾವಿರ ನೀಡಲಾಗಿತ್ತು. ಬಾಕಿ ₹9 ಸಾವಿರವನ್ನು ಶನಿವಾರ (ನ.18) ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ’ ಎಂದು ಎಸಿಬಿ ಕಚೇರಿ ಪ್ರಕಟಣೆ ತಿಳಿಸಿದೆ.