ನಂಜನಗೂಡು: ತಾಲ್ಲೂಕಿನ ರಾಜೂರು ಗ್ರಾಮದ ಸಿದ್ದರಾಜು ಎಂಬುವವರ ಕಬ್ಬಿನ ಗದ್ದೆಗೆ ಶುಕ್ರವಾರ ತಡರಾತ್ರಿ ನುಗ್ಗಿದ ಕಾಡಾನೆಗಳು ಮೂರು ಎಕರೆಯಲ್ಲಿ ಬೆಳೆದಿದ್ದ ಫಸಲು ನಾಶಪಡಿಸಿವೆ. ಅಲ್ಲದೆ, ಕೊಳವೆಬಾವಿ ಪಂಪ್ ಸೆಟ್ ನಾಶಪಡಿಸಿವೆ. ಇದೇ ಗ್ರಾಮದ ಬಸವೇಗೌಡ ಎಂಬುವವರು ಬೆಳೆದಿದ್ದ ಸೌತೆಕಾಯಿ ಫಸಲು ಕೂಡ ನಾಶವಾಗಿದೆ.