ಭತ್ತ ಕಟಾವಿಗೆ ಇನ್ನೂ 15 ದಿನಗಳು ಬೇಕಾಗಿದೆ. ಇದೇ ರೀತಿ ಮುಂದುವರಿದರೆ ರೈತರು ಭತ್ತದ ಬದಲು ಕೇವಲ ಒಣ ಹುಲ್ಲನ್ನು ಮನೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಕೂಡಲೇ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಿ ಪರಿಹಾರ ಕೊಡಿಸಬೇಕು’ ಎಂದು ಒತ್ತಾಯಿಸಿದರು. ರೈತರಾದ ಕೃಷ್ಣಪ್ಪ, ರಂಗಪ್ಪ, ನವೀನ, ಕಿರಣಗೌಡ, ಬಾಬುರಾವ್, ರಾಕೇಶ್, ಪರಮೇಶ, ಈಶ್ವರ, ದ್ವಾರಕೇಶಯ್ಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.