ಗಾಂಧೀಜಿಯನ್ನು ‘ಕೊಲ್ಲುವವರಿದ್ದರು ಖರೆ, ಕಾಯುವವರಿದ್ದರೇ?’ ಎಂಬ ಸುಧೀಂದ್ರ ಬುಧ್ಯ ಅವರ ಲೇಖನದ (ಪ್ರ.ವಾ., ಅ.20) ಹಿನ್ನೆಲೆಯಲ್ಲಿ ನೋಡಿದರೆ ಸರ್ದಾರರು ಗೃಹ ಮಂತ್ರಿಯಾಗಿ ತಪ್ಪು ಮಾಡಿದ್ದನ್ನು ದೊಡ್ಡದಾಗಿ ಹೇಳಬಹುದು. ಮೋದಿ ನೇತೃತ್ವದ ಸರ್ಕಾರದ ‘ಸರ್ದಾರ್ ಪ್ರೀತಿ’ ಸೂರ್ಯಪ್ರಕಾಶರಿಗೆ ಮೆಚ್ಚುಗೆಯಾಗುವಾಗ ಇತರರನ್ನು ಕುಬ್ಜರನ್ನಾಗಿ ಮಾಡುವುದು, ಆಕಾಶದೆತ್ತರಕ್ಕೆ ಸರ್ದಾರರ ಪ್ರತಿಮೆ ಮಾಡುತ್ತಾ ದೇಶದ ಮಹಾನ್ ನಾಯಕರ ಮೂಲಕ ದೇಶ ವಿಭಜಿಸುವವರಿಗೆ ಮತ್ತೊಮ್ಮೆ ಏಣಿ ಹಾಕಿ ಕೊಟ್ಟಂತಾಗುತ್ತದೆ.