ಕೌದೇನಹಳ್ಳಿಯಲ್ಲಿ ನಾರಾಯಣಸ್ವಾಮಿ ಅವರಿಗೆ ಸೇರಿದ ಏಳು ಮನೆಗಳಿದ್ದು, ತಿಂಗಳಿಗೆ ₹ 40 ಸಾವಿರ ಬಾಡಿಗೆ ಬರುತ್ತಿತ್ತು. ಮದುವೆಯಾಗಲು ಇತ್ತೀಚೆಗೆ ನಿರ್ಧರಿಸಿದ್ದ ಮನೋಜ್, ತನ್ನ ಜೀವನ ರೂಪಿಸಿಕೊಳ್ಳಲು ತಂದೆ ಬಳಿ ಹಣಕಾಸಿನ ನೆರವು ಕೋರಿದ್ದ. ಅಲ್ಲದೆ, ಮುಂದಿನ ದಿನಗಳಲ್ಲಿ ಮನೆ ಬಾಡಿಗೆ ಹಣದಲ್ಲಿ ತನಗೂ ಪಾಲು ನೀಡುವಂತೆ ಕೇಳಿದ್ದ. ಅದಕ್ಕೆ ನಾರಾಯಣಸ್ವಾಮಿ ಒಪ್ಪಿರಲಿಲ್ಲ.