‘ಆಧುನಿಕತೆಯ ಸವಾಲುಗಳನ್ನು ಎಲ್ಲಾ ಕಾಲದಲ್ಲೂ ಸಾಹಿತಿಗಳು ಎದುರಿಸಿದ್ದಾರೆ. ಕಂಪ್ಯೂಟರ್, ಸಾಮಾಜಿಕ ಜಾಲತಾಣಗಳನ್ನು ವಿರೋಧ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ‘ಫೇಸ್ ಬುಕ್’ ಮತ್ತು ‘ವಾಟ್ಸ್ಆ್ಯಪ್’ ಆಧುನಿಕ ಅರಳಿಕಟ್ಟೆಗಳು. ಅಲ್ಲಿ ಸಾಹಿತ್ಯ ಹುಟ್ಟದಿರಬಹುದು, ಆದರೆ, ಯುವ ಜನರು ಈ ತಾಣಗಳಲ್ಲಿ ಆಕರ್ಷಿತರಾಗಿದ್ದಾರೆ. ಅವುಗಳನ್ನೇ ಬಳಸಿಕೊಂಡು ಅವರನ್ನು ತಲುಪುವ ಪ್ರಯತ್ನ ನಡೆಯಬೇಕು. ಇಲ್ಲದಿದ್ದರೆ ಭಾಷೆ ನಶಿಸಿ ಹೋಗುತ್ತದೆ’ ಎಂದು ಹೇಳಿದರು.