ಕೊಪ್ಪ: ಕೊಪ್ಪ ಹೋಬಳಿಯ ಹಲವು ಗ್ರಾಮಗಳಲ್ಲಿ ಭತ್ತದ ಬೆಳೆಗೆ ಸೈನಿಕ ಹುಳುವಿನ ಬಾಧೆ ಕಾಡುತ್ತಿದೆ. ಕಟಾವಿಗೆ ಬಂದಿರುವ ಭತ್ತದ ತೆನೆಗಳನ್ನು ನಾಶ ಮಾಡುತ್ತಿರುವ ಹುಳುಗಳಿಂದ ರೈತರು ಕಂಗಲಾಗಿದ್ದಾರೆ.
ಹೋಬಳಿಯ ಬೆಸಗರಹಳ್ಳಿ, ಕೆರೆಮೇಗಲದೊಡ್ಡಿ, ಈರೇಗೌಡನ ದೊಡ್ಡಿ. ಹೊಸಕೆರೆ, ಬೆಳತೂರು, ಮಹರ್ನವಮಿದೊಡ್ಡಿ. ಹರಳಹಳ್ಳಿ, ನಿಲುವಾಗಿಲು, ಎಸ್.ಐ. ಕೋಡಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಈ ಸಮಸ್ಯೆ ಎದುರಾಗಿದೆ.
ಭತ್ತದ ತೆನೆಗಳು ಹುಳುಗಳ ಪಾಲಾ ಗುತ್ತಿವೆ. ಕಂಬಳಿ ಹುಳುವಿನಂತಿರುವ ಸೈನಿಕ ಹುಳುಗಳು ಭತ್ತದ ಪೈರಿನ ಕಾಂಡದ ಬಳಿ ರಸ ಹಿರಿಕೊಂಡು ಭತ್ತವನ್ನು ಹುದುರಿಸುತ್ತಿವೆ. ಸದ್ಯ ಈಗ ರಾಕೆಟ್ ಎಂಬ ಔಷದಿಯನ್ನು ಸಿಂಪಡಿಸಲಾಗಿದೆ ಎನ್ನುತ್ತಾರೆ ರೈತರಾದ ನಾರಾಯಣ್, ವಿಜಯೇಂದ್ರ, ರಾಧಾಕೃಷ್ಣ. ರಾಕೆಟ್ ಎಂಬ ಔಷಧಿಯನ್ನು ಸಿಂಪಡಿಸುವುದರಿಂದ ಈ ಹುಳುಗಳ ಬಾಧೆಯನ್ನು ತಡೆಗಟ್ಟಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ರವಿ ತಿಳಿಸಿದ್ದಾರೆ.