ಅವರು ನಗರದ ವಾರ್ಡ ನಂ.13ರ ಶಿವಾಜಿ ಸರ್ಕಲ್ ಪ್ರಭಾವಿ ನಾಯಕ ಶ್ರೀಕಾಂತ ನ್ಯಾಮಗೌಡ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಪಿಎಂಸಿ ನಿರ್ದೇಶಕ ಅಪ್ಪಾಸಾಹೇಬ ಪವಾರ ಮಾತನಾಡಿ ತಾಲ್ಲೂಕಿ ಹಲವಾರು ಇತರ ಪಕ್ಷದ ಮುಖಂಡರು ಪಕ್ಷದ ನಾಯಕರ ಸಂಪರ್ಕದಲ್ಲಿದ್ದು ಸೂಕ್ತ ಸಮಯದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದರು. ಶಾಸಕ ಗೋವಿಂದ ಕಾರಜೋಳ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಲ್.ಕೆ.ಬಳಗಾನೂರ, ಸುನೀಲ ಘೋರ್ಪಡೆ, ಸುವರ್ಣಪ್ಪ ಕೊಣ್ಣೂರ ಇದ್ದರು.