‘ಪೂರ್ವಜರ ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ದೂರದ ದೇಶಗಳಿಂದ ಆಗಮಿಸುವ ವಿದೇಶಿಯರು ಸ್ಮಾರಕಗಳನ್ನು ವೀಕ್ಷಿಸಿ ಅಧ್ಯಯನ ಮಾಡುತ್ತಾರೆ. ನಾವೂ ಸಹ ಸ್ಮಾರಕಗಳ ಮೂರ್ತಿಶಿಲ್ಪ, ಶಾಸನಗಳ ಕುರಿತು ಅಧ್ಯಯನ ಮಾಡಬೇಕು. ನಮ್ಮ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೀತಿಸಬೇಕು’ ಎಂದರು.