ಧಾರವಾಡ: ನಗರದಲ್ಲಿ ಭಾನುವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆಯಿಂದಾಗಿ ಇಲ್ಲಿನ ಎಸ್ಕೆಎಸ್ ಕಾಲೊನಿ, ತುಂಗಭದ್ರ ಹೌಸಿಂಗ್ ಸೊಸೈಟಿ ಬಡಾವಣೆ, ಗಾಂಧಿಚೌಕ್, ಜನ್ನತ್ನಗರ, ಸಿ.ಬಿ.ನಗರದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು. ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇತ್ತು. ಬೆಳಿಗ್ಗೆ 10.30 ಮಧ್ಯಾಹ್ನ 12.30 ರವರೆಗೆ ಧಾರಾಕಾರ ಮಳೆ ಸುರಿಯಿತು.