ಸಹಸ್ರಾರು ಭಕ್ತವೃಂದ, ಪ್ರವಾಸಿಗರ ತಂಡೋಪತಂಡ ಹಾಗೂ ಯಾತ್ರಾರ್ಥಿಗಳ ಸುರಕ್ಷತೆ ಕುರಿತು ವಿಶೇಷ ನಿಗಾ ವಹಿಸಿದಂತಿಲ್ಲ. ಜಿಲ್ಲಾಡಳಿತವು ಸ್ವಚ್ಛತೆ, ಕಾನೂನು ಸುವ್ಯವಸ್ಥೆ ಕುರಿತು ಸ್ಪಷ್ಟ ಕ್ರಮ ಜರುಗಿಸುತ್ತಿಲ್ಲವೆನ್ನಲಾಗಿದೆ. ಸಿ.ಸಿ. ಟಿ.ವಿ. ಕ್ಯಾಮೆರಾ, ವರ್ಚುವಲ್ ವೀಕ್ಷಣೆ, ಬೃಹತ್ ಟಿ.ವಿ. ಪರದೆ ಬಗ್ಗೆ ಮಾತ್ರ ಪ್ರಕಟಣೆಗಳು ಹೊರಬಿದ್ದಿವೆ. ಕಿಸೆಗಳ್ಳರ ಹಾವಳಿ, ವಾಹನ ದಟ್ಟನೆಯ ಗೊಂದಲ, ಆಕಸ್ಮಿಕ ಅವಘಡ ಪ್ರತಿಬಂಧಕ ಕ್ರಮಗಳ ಬಗ್ಗೆ ವಿಶೇಷ ಮುಂಜಾಗ್ರತೆ ವಹಿಸುವುದು ಅಗತ್ಯ.