‘ಹೊಸ ವಿಭಾಗಗಳು ಹಾಗೂ ಉಪವಿಭಾಗಗಳ ಸೇರ್ಪಡೆಗೆ ಅನುವು ಮಾಡಿಕೊಡಲು ಕಂದಾಯ ಪಾವತಿಯ ಸಾಫ್ಟ್ವೇರ್ನ ಪರಿಷ್ಕರಣೆ ಮಾಡುವಂತೆ ವಿಭಾಗ ಹಾಗೂ ಉಪವಿಭಾಗಗಳ ಎಂಜಿನಿಯರ್ಗಳಿಗೆ ಸೂಚಿಸಿ ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದೇನೆ. ನೀರಿನ ಸಂಪರ್ಕ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿದ್ದೇನೆ. ಆದರೆ, ಜನರು ಶುಲ್ಕ ಪಾವತಿಸಿ ಭರ್ತಿ ಮಾಡಿದ ಅರ್ಜಿ ಸಲ್ಲಿಸಿದ ಬಳಿಕವೇ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಹೇಳಿದರು.