‘ಗಡಿಬಿಡಿ ಏನಿಲ್ಲ. ಮಠದೊಳಗೆ ಜನಸಂದಣಿ ಹೆಚ್ಚಾಗಿ ಬಿಡುತ್ತದೆ. ಮತ್ತೊಮ್ಮೆ ಬರುತ್ತೇನೆ’ ಎಂದು ನಟ ರಜನಿಕಾಂತ್ ಅವರು ಸ್ವಾಮೀಜಿಗಳಿಗೆ ಹೇಳಿದರು. ಸುಬುಧೇಂದ್ರ ತೀರ್ಥರು ರಜನಿಕಾಂತ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ, ಪರಿಮಳ ಪ್ರಸಾದ, ತುಳಸಿಮಣಿ ಹಾಗೂ ಬೃಂದಾವನ ಪ್ರತಿಮೆಯೊಂದನ್ನು ನೆನಪಿನ ಕಾಣಿಕೆಯಾಗಿ ನೀಡಿದರು.