ಒಂದು ಎಕರೆ ಪ್ರದೇಶದಲ್ಲಿ ಬಿಳಿಜೋಳ, ಒಂದು ಎಕರೆ ಕೊರ್ಲೆ ಬಿತ್ತನೆ ಪ್ರಯೋಗ ಇಲ್ಲಿ ಯಶಸ್ವಿಯಾಗಿದೆ. ಕೊರ್ಲೆ ಬೀಜವನ್ನು ಹೊಲದಲ್ಲಿ ಬಿತ್ತನೆ ಮಾಡುವ ಮುನ್ನ ಹೊಲಕ್ಕೆ ಒಮ್ಮೆ ಮಾತ್ರ ಸಗಣಿ ಗೊಬ್ಬರ ಹಾಕಿದ್ದು ಬಿಟ್ಟರೆ, ನೀರು ಕಟ್ಟಲಿಲ್ಲ, ಕಳೆ ತೆಗೆಯಲಿಲ್ಲ. ಯಾವುದೇ ಕ್ರಿಮಿನಾಶಕ, ಔಷಧ ಸಿಂಪರಣೆ ಮಾಡಿಲ್ಲ. ಜೀವಾಮೃತ ಬಳಸಿಲ್ಲ ಎಂದು ವಿವರಿಸಿದರು. ಕಡಿಮೆ ನೀರು ಇದ್ದಾಗ ಚೆನ್ನಾಗಿ ಈ ಬೆಳೆ ಬೆಳಯುತ್ತದೆ. ಅದಕ್ಕೆ ಪೂರಕ ವಾತಾವರಣ ಇದ್ದ ಕಾರಣ ಬೆಳೆ ಹುಲುಸಾಗಿ ಬೆಳೆಯಿತು.