ತಾಲ್ಲೂಕಿನಲ್ಲಿ ಹಿಂಗಾರಿನಲ್ಲಿ ರೈತರು ಜೋಳ, ಕಡಲೆ, ಗೋಧಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದು, ಕೆಲವು ಬೆಳೆಗಳು ಹೂವು ಬಿಡುವ, ಕಾಳು ಕಟ್ಟುವ ಹಂತದಲ್ಲಿವೆ. ಬೆಳೆ ಈ ಹಂತದಲ್ಲಿರುವವರಿಗೆ ಮಳೆ ಬೇಸರ ತರಿಸಿದೆ. ಆದರೆ, ಕೆಲವರು ತಡವಾಗಿ ಬಿತ್ತನೆ ಮಾಡಿದ್ದು, ಬೆಳೆಗಳು ಮೇಲೇರುವ ಹಂತದಲ್ಲಿವೆ. ಅಂತಹ ಬೆಳೆಗಳಿಗೆ ನೀರು ಅವಶ್ಯವಾಗಿತ್ತು. ಈಗ ಬಿದ್ದ ಅಕಾಲಿಕ ಮಳೆಯು ರೈತರಿಗೆ ಸಂತಸ ತಂದಿದೆ.