ನಗರದಲ್ಲಿ ಸೋಮವಾರ ಏರ್ಪಡಿಸಿದ್ದ 64ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಯೋಜನೆಗೆ ₹8 ಸಾವಿರ ಕೋಟಿ ಒದಗಿಸಬೇಕಿದ್ದು, 2018 ರ ಮಾರ್ಚ್ ಅಂತ್ಯದವರೆಗೂ ಸಹಕಾರಿ ಬ್ಯಾಂಕುಗಳಿಂದ ಬರುವ ಬಿಲ್ ಆಧರಿಸಿ ಎಲ್ಲ ಹಣವನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುವುದು. ಸಾಲ ಮನ್ನಾ ಯೋಜನೆಯಿಂದ ಹಿಂದುಳಿದ, ಪರಿಶಿಷ್ಟ ವರ್ಗ ಹಾಗೂ ಎಲ್ಲ ಬಡ ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.