ಕವಿಗಳು, ಜನಸಾಮಾನ್ಯರು, ಜನಪದ ಕಲಾವಿದರು, ನಟ ನಟಿಯರು ಈ ಸ್ವತಂತ್ರ ಅಭಿವ್ಯಕ್ತಿಯ ಹೋರಾಟವನ್ನು ಮುಂದೆ ಕೊಂಡೊಯ್ಯುತ್ತಲೇ ಬಂದಿದ್ದಾರೆ. ಈ ಎಲ್ಲ ಆಶಯಗಳನ್ನು ಮಂಡಿಸಲೆತ್ನಿಸುವ ‘ಮುಂದಣ ಕಥನ’ ನಾಟಕ ಹಲಬಗೆಯ ಪ್ರದರ್ಶನ ಪ್ರಕಾರಗಳನ್ನು ಬಳಸಿ ಈ ಅಭಿವ್ಯಕ್ತಿ ಹೋರಾಟದ ನಿರಂತರ ತುಡಿತಗಳನ್ನು ಮಂಡಿಸಲೆತ್ನಿಸುತ್ತದೆ.