ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಸಿಸಿಐಸಿಐ) ಎಂ.ಜಿ.ರಸ್ತೆಯಲ್ಲಿರುವ ಮಳಿಗೆಯಲ್ಲಿ ಕರಕುಶಲ ಕಲಾವಸ್ತುಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಿದೆ. ಮರದ ಕೆತ್ತನೆಗಳು, ಕುಂಭಕೋಣಂನ ಕಂಚಿನ ಪ್ರತಿಮೆಗಳು, ದಿಲ್ಲಿಯ ಹಿತ್ತಾಳೆ ಕಲಾವಸ್ತುಗಳು ಅಲ್ಲದೇ ರಾಜಾಸ್ಥಾನದ ಕೆತ್ತನೆಯ ಕಲಾವಸ್ತುಗಳನ್ನು ಪ್ರದರ್ಶನ ಒಳಗೊಂಡಿದೆ.
ಢೋಕ್ರಾ ಬ್ರಾಸ್ ಕ್ರಾಫ್ಟ್, ಬ್ರಾಸ್ ಎನಾಮೆಲ್ ವೇಸ್ಗಳು, ಬೌಲ್ಗಳು, ಲ್ಯಾಂಪ್ಗಳು, ಮೂರ್ತಿಗಳು, ಸೂಕ್ಷ್ಮ ಕೆತ್ತನೆ ಹೊಂದಿರುವ ಮರದ ಕಲಾವಸ್ತುಗಳು, ಚಿನ್ನ ಮತ್ತು ಬೆಳ್ಳಿ ಲೇಪನದ ಕೊಡುಗೆಯ ವಸ್ತುಗಳು ಸಾಂಪ್ರದಾಯಕ ಮಾತ್ರವಲ್ಲದೇ ಇಂದಿನ ಒಲವುಗಳಿಗೆ ಹೊಂದಿಕೊಳ್ಳುವಂತಿವೆ.
ಪ್ರದರ್ಶನದ ಕೌಂಟರ್ನಲ್ಲಿ ಖರೀದಿಸಿದವರಿಗೆ ವಿಶೇಷವಾದ ಶೇ 15ರಿಂದ ಶೇ 35ರಷ್ಟು ರಿಯಾಯಿತಿ ನೀಡಲಾಗುವುದು.