‘ಆರಂಭದಲ್ಲೇ ಗಟಾರಕ್ಕಿಳಿದ ಪ್ರಚಾರ’ ಎಂಬ ಲೇಖನಕ್ಕೆ (ನಾರಾಯಣ ಎ., ಪ್ರ.ವಾ., ನ. 21) ಪ್ರತಿಕ್ರಿಯೆ. ನಿಜವಾದ ನಾಯಕರ ಬಾಯಲ್ಲಿ ಈ ಮಟ್ಟದ ಭಾಷೆ ಹುಟ್ಟುವುದಿಲ್ಲ; ವೈಯುಕ್ತಿಕ ನಿಂದನೆಗೆ ಅವರು ಇಳಿಯುವುದಿಲ್ಲ. ‘ನಾಯಕತ್ವದ ಗುಣ ಲವಲೇಶವೂ ಇಲ್ಲದೆ ಏನೇನನ್ನೋ ನೆಚ್ಚಿಕೊಂಡು ನಾಯಕರಾಗಹೊರಟವರು ಕೆಳಮಟ್ಟದ ಮಾತುಗಳನ್ನಾಡಿಯೇ ಮೇಲೆ ಮೇಲೆ ಏರಲು ಬಯಸುತ್ತಾರೆ’ ಎಂದು ಅವರು ಹೇಳಿರುವ ಮಾತುಗಳನ್ನು ನಾನು ಎರಡೂ ದಶಕಗಳಿಂದಲೂ ಎಲ್ಲಾ ಪಕ್ಷಗಳ ನಾಯಕರ ಕೀಳು ಅಭಿರುಚಿಯ ಹೇಳಿಕೆಗಳನ್ನು ಉಲ್ಲೇಖಿಸಿ ಟೀಕೆ ಮಾಡುತ್ತಲೇ ಬಂದಿದ್ದೇನೆ.