ಐವತ್ತೋ ಅರವತ್ತೋ ಹೆಣಗಳನ್ನು ಬೀಳಿಸಿ ಅದರ ಮೇಲೆ ಘೋರಿ ಕಟ್ಟುವಂತೆ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ. ಹಲ್ಲುಕಿತ್ತ ಹಾವಿನಂತಿರುವ ಈ ಮಸೂದೆ ಮಂಡಿಸಲು ಇಷ್ಟು ಜನರ ಬಲಿ ಬೇಕಿತ್ತೇ? ಆ ಅಮಾಯಕರ ಸಾವಿನ ಜವಾಬ್ದಾರಿ ಹೊತ್ತುಕೊಳ್ಳಲು ಸರ್ಕಾರವಾಗಲೀ ವೈದ್ಯರಾಗಲೀ ಸಿದ್ಧರಿಲ್ಲ.