ಹಫೀಸ್ ಹಾಗೂ ಲಷ್ಕರ್– ಎ– ತಯಬಾ ಕಮಾಂಡರ್ ಝಕಿ–ಉರ್ ರೆಹಮಾನ್ ಲಖ್ವಿ ವಿರುದ್ಧ ಇರುವ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಭಾರತ ಈಗಾಗಲೇ ಇಸ್ಲಾಮಾಬಾದ್ಗೆ ನೀಡಿದೆ. ಅದರ ಆಧಾರದ ಮೇಲೆ 166 ಮಂದಿಯ ಸಾವಿಗೆ ಕಾರಣವಾದ ಮುಂಬೈ ದಾಳಿಯ ಮರು ತನಿಖೆಯನ್ನು ನಡೆಸುವಂತೆ ಭಾರತ ಮೇಲಿಂದ ಮೇಲೆ ಪಾಕಿಸ್ತಾನವನ್ನು ಕೋರುತ್ತಾ ಬಂದಿದೆ. ಆದರೆ ಈ ನಡುವೆಯೇ, ನ್ಯಾಯಾಂಗ ಪರಿಶೀಲನಾ ಮಂಡಳಿ ಇಂಥದ್ದೊಂದು ಆದೇಶ ಹೊರಡಿಸಿದೆ.