ಬಂಗಾಳ ರಾಜ್ಯಪಾಲರ ವಿಚಾರಣೆಗೆ ಒತ್ತಾಯ
ನವದೆಹಲಿ, ನ. 23– ಪಶ್ಚಿಮ ಬಂಗಾಳದ ರಾಜ್ಯಪಾಲರನ್ನು ವಿಚಾರಣೆಗೆ ಗುರಿಪಡಿಸಬೇಕೆಂದು ಇಂದು ಲೋಕಸಭೆಯಲ್ಲಿ ವಿರೋಧಪಕ್ಷಗಳು ಒತ್ತಾಯಪಡಿಸಿದಾಗ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಕಾವೇರಿತು.
ಶ್ರೀ ಎನ್.ಸಿ. ಚಟರ್ಜಿ (ಸ್ವತಂತ್ರ), ಶ್ರೀ ಪಿ. ರಾಮಮೂರ್ತಿ (ಎಡಕಮ್ಯುನಿಸ್ಟ್) ಮತ್ತು ಎಸ್.ಎನ್. ದ್ವಿವೇದಿ (ಪಿ.ಎಸ್.ಪಿ.) ಅವರು ರಾಜ್ಯಪಾಲರ ಕ್ರಮ ರಾಜ್ಯಾಂಗ ವಿರೋಧವೆಂದು ಉಗ್ರವಾಗಿ ಟೀಕಿಸಿದರು.
ಬಂಗಾಳದ ಬಹುಭಾಗದಲ್ಲಿ ಕರ್ಫ್ಯೂ
ಕಲ್ಕತ್ತ, ನ. 23– ಕಲ್ಕತ್ತ ಮತ್ತು ಅದರ ಉಪನಗರಗಳಲ್ಲಿ ಇಂದೂ ಸಹ ಗಲಭೆ, ಗಲಾಟೆ ಮತ್ತು ಗೋಳೀಬಾರ್ಗಳು ಎಲ್ಲೆಡೆಯೂ ವ್ಯಾಪಕವಾಗಿ ನಡೆದವು.
ಸಂಯುಕ್ತರಂಗ ಮತ್ತು ಅದರ ಕಾರ್ಮಿಕ ಅಂಗ ರಾಷ್ಟ್ರೀಯ ಸಂಗ್ರಾಮ ಸಮಿತಿಗಳು ರಾಜ್ಯಾದ್ಯಂತ 2 ದಿನಗಳ ಸಾರ್ವತ್ರಿಕ ಮುಷ್ಕರ ಮತ್ತು ಹರತಾಳಗಳಿಗೆ ಇತ್ತಿದ್ದ ಕರೆಯ ಎರಡನೇ ದಿನವಿದು.