ಪರಂಪರೆ ಪ್ರದೇಶದ ಅನಿಯಂತ್ರಿತ ಅಭಿವೃದ್ಧಿ ಮತ್ತು ವಾಣಿಜ್ಯ ದುರ್ಬಳಕೆ ತಡೆಗಟ್ಟುವ ಅಧಿಕಾರವನ್ನು ಈ ಪ್ರಾಧಿಕಾರಕ್ಕೆ ನೀಡಲಾಗುವುದು. ಬಾಗಲಕೋಟೆಯಲ್ಲಿ ಕೇಂದ್ರ ಕಚೇರಿ ಹೊಂದಲಿರುವ ಪ್ರಾಧಿಕಾರಕ್ಕೆ, ಸ್ಥಳೀಯ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಸದಸ್ಯ ಕಾರ್ಯದರ್ಶಿ (ಪ್ರಾಧಿಕಾರದ ಆಯುಕ್ತ) ಸೇರಿ ಒಟ್ಟು 13 ಸದಸ್ಯರಿರುತ್ತಾರೆ. ಕೆಎಎಸ್– ಎ (ಹಿರಿಯ ಶ್ರೇಣಿ) ಅಧಿಕಾರಿಯನ್ನು ಆಯುಕ್ತರಾಗಿ ಸರ್ಕಾರ ನೇಮಿಸಲಿದೆ.