‘ಭಾರತೀಯತೆಯು ಎಲ್ಲಾ ಪ್ರಾದೇಶಿಕ ಭಾಷೆ, ಸಂಸ್ಕೃತಿ, ಉಪಸಂಸ್ಕೃತಿ ಒಳಗೊಂಡಿದೆ. ಅದನ್ನು ಸಂಕುಚಿತಗೊಳಿಸಿ, ನಿರ್ದಿಷ್ಟ ಚೌಕಟ್ಟಿಗೆ ಒಳಪಡಿಸಿದರೆ ಅದಕ್ಕೆ ಅರ್ಥ ಇರುವುದಿಲ್ಲ. ವಿವಿಧತೆ ಹಾಗೂ ಪ್ರಾದೇಶಿಕ ಸೊಗಡು ತನ್ನೊಳಗೆ ತುಂಬಿಸಿಕೊಂಡಾಗ ಮಾತ್ರ ಭಾರತೀಯತೆ ಮೈದಳೆಯುತ್ತದೆ. ಕನ್ನಡಿಗರು ಕನ್ನಡ ಮಾತನಾಡಲು, ಸಂಸ್ಕೃತಿ ಅನಾವರಣಗೊಳಿಸಲು ಹಿಂಜರಿಯಬಾರದು. ನಮ್ಮ ಭಾಷೆ, ಸಂಸ್ಕೃತಿ ಹಾಗೂ ಆಚರಣೆಗಳು ನಮ್ಮ ವ್ಯಕ್ತಿತ್ವ ರೂಪಿಸಿರುವುದನ್ನು ಮರೆಯಬಾರದು’ ಎಂದರು.