ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಬಾವಿಗೆ ಬಿದ್ದು ಬಾಲಕ ಸಾವು

Last Updated 24 ನವೆಂಬರ್ 2017, 15:24 IST
ಅಕ್ಷರ ಗಾತ್ರ

ಕೊಪ್ಪಳ: ಪೀಪಿ ಹೆಕ್ಕಲು ಹೋಗಿ ಬಾವಿಗೆ ಬಿದ್ದು ಅನಿಲ್ ಕುಮಾರ್(10) ಎಂಬ ಬುದ್ದಿಮಾಂದ್ಯ ಬಾಲಕ ಶುಕ್ರವಾರ ಮೃತಪಟ್ಟಿದ್ದಾನೆ.

ಇಲ್ಲಿನ ಗಣೇಶ ತಗ್ಗು ಪ್ರದೇಶದ ಚನ್ನಬಸವೇಶ್ವರ ನಗರದ ವೀರೇಶ್-ಸುಮಂಗಲಾ ದಂಪತಿ ಪುತ್ರ ಅನಿಲ್ ಬೆಳಿಗ್ಗೆ ಆಟವಾಡುತ್ತಿದ್ದಾಗ ಘಟನೆ ನಡೆದಿದೆ. ಸಂಜೆ ವೇಳೆ ಬಾಲಕನನ್ನು ಹುಡುಕಾಡಿದಾಗ ಘಟನೆ ಗೊತ್ತಾಗಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವಾದಳದವರು ಬಾಲಕನ ಮನೆ ಸಮೀಪದ ಲಕ್ಷ್ಮೀದೇವಿ ದೇವಸ್ಥಾನದ ಬಾವಿಯಿಂದ ಮೃತದೇಹ ಮೇಲೆತ್ತಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT