ಕೊಪ್ಪಳ: ಪೀಪಿ ಹೆಕ್ಕಲು ಹೋಗಿ ಬಾವಿಗೆ ಬಿದ್ದು ಅನಿಲ್ ಕುಮಾರ್(10) ಎಂಬ ಬುದ್ದಿಮಾಂದ್ಯ ಬಾಲಕ ಶುಕ್ರವಾರ ಮೃತಪಟ್ಟಿದ್ದಾನೆ.
ಇಲ್ಲಿನ ಗಣೇಶ ತಗ್ಗು ಪ್ರದೇಶದ ಚನ್ನಬಸವೇಶ್ವರ ನಗರದ ವೀರೇಶ್-ಸುಮಂಗಲಾ ದಂಪತಿ ಪುತ್ರ ಅನಿಲ್ ಬೆಳಿಗ್ಗೆ ಆಟವಾಡುತ್ತಿದ್ದಾಗ ಘಟನೆ ನಡೆದಿದೆ. ಸಂಜೆ ವೇಳೆ ಬಾಲಕನನ್ನು ಹುಡುಕಾಡಿದಾಗ ಘಟನೆ ಗೊತ್ತಾಗಿದೆ.
ಅಗ್ನಿಶಾಮಕ ಮತ್ತು ತುರ್ತು ಸೇವಾದಳದವರು ಬಾಲಕನ ಮನೆ ಸಮೀಪದ ಲಕ್ಷ್ಮೀದೇವಿ ದೇವಸ್ಥಾನದ ಬಾವಿಯಿಂದ ಮೃತದೇಹ ಮೇಲೆತ್ತಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.