ಶುಕ್ರವಾರ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆಯ ನಂತರ, ರಥಕ್ಕೆ ಬಲಿ ಅನ್ನ ಸಮರ್ಪಣೆ ಮಾಡಲಾಯಿತು. ನಂತರ ಹೋಮ ಮಾಡಲಾಯಿತು. ಮಧ್ಯಾಹ್ನ 1.30ಕ್ಕೆ ರಥೋತ್ಸವ ಆರಂಭವಾಯಿತು. ಗ್ರಾಮದ ಒಳಗಿನ ದೇವಸ್ಥಾನ ಮುಂಭಾಗದಿಂದ ರಥೋತ್ಸವ ನೇತ್ರನಹಳ್ಳಿ ರಸ್ತೆಯಲ್ಲಿರುವ ಪಾದಗಟ್ಟೆವರೆಗೆ ಸಾಗಿ ಮರಳಿ ದೇವಸ್ಥಾನ ಆವರಣಕ್ಕೆ ವಾಪಸ್ ತರಲಾಯಿತು.