ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಮುಕ್ತ ಶ್ರವಣಬೆಳಗೊಳಕ್ಕೆ ಸಹಕರಿಸಿ

Last Updated 25 ನವೆಂಬರ್ 2017, 7:39 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಲು ಮಹಾಮಸ್ತಕಾಭಿಷೇಕದ ವಿಶೇಷಾಧಿಕಾರಿ ಬಿ.ಎನ್.ವರಪ್ರಸಾದ್ ರೆಡ್ಡಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಪ್ರಭಾಕರ್ ನೇತೃತ್ವದಲ್ಲಿ ವರ್ತಕರ ಸಭೆ ಕರೆಯಲಾಗಿತ್ತು.

‘ಗ್ರಾಮ ಪಂಚಾಯಿತಿಯಿಂದ ಹಸಿಕಸ, ಒಣಕಸವನ್ನಾಗಿ ವಿಂಗಡಿಸುವಂತೆ ಎರಡು ಬಕೆಟ್‌ಗಳನ್ನು ನೀಡಲಾಗುತ್ತದೆ. ವಾರದಲ್ಲಿ ಎರಡು ದಿನ ಒಣ ಕಸ ಹಾಗೂ ಉಳಿದ 5 ದಿನ ಹಸಿಕಸವನ್ನು ಸಂಗ್ರಹಿಸಿ ಕೋರನಹಳ್ಳಿ ಬಳಿ 5 ಎಕರೆ ಪ್ರದೇಶದಲ್ಲಿ ಸಾವಯವ ಗೊಬ್ಬರವನ್ನಾಗಿ ಮಾಡಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ಕಲುಷಿತಗೊಂಡಿದ್ದ ರಾಚೇನಹಳ್ಳಿ ಕೆರೆ ನೀರನ್ನು ಹೊರಗಡೆಗೆ ಹಾಕಿದ್ದು, ಇಂದಿನಿಂದಲೇ ಟ್ರಾಕ್ಟರ್‌ನಲ್ಲಿ ಹೂಳು ತೆಗೆಯಲಾಗುತ್ತಿದೆ.

ಪ್ರಥಮ ಬಾರಿಗೆ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣಾ ಘಟಕ ಅಳವಡಿಸಲಾಗುತ್ತಿದೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಜಾಥಾ ಮಾಡಲಾಗುತ್ತದೆ’ ಎಂದರು. ಪಿಡಿಒ ನವೀನ್, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷಣ್, ಜನಾರ್ದನ್, ವರ್ತಕರಾದ ರಾಮಸ್ವಾಮಿ, ರಘು ಮೆಸ್, ತರಕಾರಿ ವ್ಯಾಪಾರಿಗಳು, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT