ಶ್ರವಣಬೆಳಗೊಳ: ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಲು ಮಹಾಮಸ್ತಕಾಭಿಷೇಕದ ವಿಶೇಷಾಧಿಕಾರಿ ಬಿ.ಎನ್.ವರಪ್ರಸಾದ್ ರೆಡ್ಡಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಪ್ರಭಾಕರ್ ನೇತೃತ್ವದಲ್ಲಿ ವರ್ತಕರ ಸಭೆ ಕರೆಯಲಾಗಿತ್ತು.
‘ಗ್ರಾಮ ಪಂಚಾಯಿತಿಯಿಂದ ಹಸಿಕಸ, ಒಣಕಸವನ್ನಾಗಿ ವಿಂಗಡಿಸುವಂತೆ ಎರಡು ಬಕೆಟ್ಗಳನ್ನು ನೀಡಲಾಗುತ್ತದೆ. ವಾರದಲ್ಲಿ ಎರಡು ದಿನ ಒಣ ಕಸ ಹಾಗೂ ಉಳಿದ 5 ದಿನ ಹಸಿಕಸವನ್ನು ಸಂಗ್ರಹಿಸಿ ಕೋರನಹಳ್ಳಿ ಬಳಿ 5 ಎಕರೆ ಪ್ರದೇಶದಲ್ಲಿ ಸಾವಯವ ಗೊಬ್ಬರವನ್ನಾಗಿ ಮಾಡಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ಕಲುಷಿತಗೊಂಡಿದ್ದ ರಾಚೇನಹಳ್ಳಿ ಕೆರೆ ನೀರನ್ನು ಹೊರಗಡೆಗೆ ಹಾಕಿದ್ದು, ಇಂದಿನಿಂದಲೇ ಟ್ರಾಕ್ಟರ್ನಲ್ಲಿ ಹೂಳು ತೆಗೆಯಲಾಗುತ್ತಿದೆ.
ಪ್ರಥಮ ಬಾರಿಗೆ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣಾ ಘಟಕ ಅಳವಡಿಸಲಾಗುತ್ತಿದೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಜಾಥಾ ಮಾಡಲಾಗುತ್ತದೆ’ ಎಂದರು. ಪಿಡಿಒ ನವೀನ್, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷಣ್, ಜನಾರ್ದನ್, ವರ್ತಕರಾದ ರಾಮಸ್ವಾಮಿ, ರಘು ಮೆಸ್, ತರಕಾರಿ ವ್ಯಾಪಾರಿಗಳು, ಇದ್ದರು.