ಬೆಳಿಗ್ಗೆ 11ರ ಸುಮಾರಿಗೆ ‘ಮಯೂರ’ ಹೆಸರಿನ ಸಾಕಾನೆಯನ್ನು ಹೇರೂರು ಕಾಡಿಗೆ ಕರೆದೊಯ್ಯುವ ವೇಳೆ ಆನೆಯ ಬೆನ್ನು ಬಿಸಿಯಾಗಿದೆ. ಮಾವುತ ಪಕ್ಕದಲ್ಲಿದ್ದ ಮರವನ್ನೇರಿ ಆನೆಗೆ ವಿಶ್ರಾಂತಿ ನೀಡಲು ಮುಂದಾಗಿದ್ದಾರೆ. ಆಗ, ಕಾಲುಜಾರಿ ಮರದಿಂದ ಬಿದ್ದ ಕಾರಣ ಗಾಬರಿಗೊಂಡ ಆನೆಯು ದಾಳಿ ನಡೆಸಿದೆ. ಸುಮಾರು 100 ಮೀಟರ್ ಎಳೆದೊಯ್ದು ಎಸೆದಿದೆ.