ಬಂಗಾರಪೇಟೆ: ತಾಲ್ಲೂಕಿನ ಗಡಿಯೊಳಕ್ಕೆ ನುಗ್ಗಿರುವ ಕಾಡಾನೆಗಳ ಹಿಂಡು ಎರಡು ದಿನದಿಂದ ಅಪಾರ ಬೆಳೆ ನಾಶ ಮಾಡಿದೆ. ತಾಲ್ಲೂಕಿನ ಚಿಕ್ಕಕಳವಂಚಿ ಗ್ರಾಮದ ಹೊಲ ಗದ್ದೆ, ತೋಟಗಳಿಗೆ ಲಗ್ಗೆಯಿಟ್ಟಿರುವ 5 ಆನೆಗಳ ಹಿಂಡು ಟೊಮೆಟೊ, ಭತ್ತ, ರಾಗಿ, ಪಪ್ಪಾಯ, ಬೀನ್ಸ್ ಬೆಳೆ ನಾಶ ಮಾಡಿವೆ. ಅಲ್ಲದೆ ಡ್ರಿಪ್ ಪೈಪ್ಸ್, ಮೋಟಾರ್, ಪೈಪ್ಗಳನ್ನು ಕೆಡವಿದೆ.