ಉಡುಪಿ:ಚಂಪಾ ಷಷ್ಠಿಯ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರು ಶುಕ್ರವಾರ ಎಡೆಸ್ನಾನ ಮಾಡಿದರು. ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಬೆಳಿಗ್ಗೆ ದೇವರಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನದ ಸುತ್ತಲೂ ದೇವರಿಗೆ ಎಡೆ ಇಡಲಾಯಿತು. ಗೋ ಪೂಜೆ ಮಾಡಿ ಅಕ್ಕಿ– ಬೆಲ್ಲ ನೀಡಿದ ನಂತರ ಭಕ್ತರು ಅದರ ಮೇಲೆ ಉರುಳಿದರು.