ಕಲಬುರ್ಗಿ: ನಗರದ ಶರಣ ಬಸವೇಶ್ವರ ಕೆರೆಯಲ್ಲಿ ಶನಿವಾರದಿಂದ ಮೀನು ಶಿಕಾರಿ ಶುರುವಾಗಿದೆ.ಶರಣ ಬಸವೇಶ್ವರ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಕೆರೆಯಲ್ಲಿ ಒಂದೂವರೆ ವರ್ಷದ ಹಿಂದೆ ಮೀನಿನ ಮರಿಗಳನ್ನು ಬಿಡಲಾಗಿತ್ತು. ಅವು ಬೆಳೆದು ದೊಡ್ಡದಾಗಿವೆ.ಯಾದಗಿರಿಯ ಮಲ್ಲಿಕಾರ್ಜುನ ತಾಯಪ್ಪ ಅವರು ₹26 ಲಕ್ಷಕ್ಕೆ ಗುತ್ತಿಗೆ ಪಡೆದಿದ್ದು ಮೀನು ಹಿಡಿಯಲು ಬೆಸ್ತರನ್ನು ನೇಮಿಸಿಕೊಂಡಿದ್ದಾರೆ. ಅವರು ಬಲೆಯನ್ನು ಬೀಸಿ ಮೊದಲ ದಿನವೇ ಭರ್ಜರಿಯಾಗಿ ಮೀನು ಶಿಕಾರಿ ಮಾಡಿ, ಡಬ್ಬಕ್ಕೆ ತುಂಬುವುದರಲ್ಲಿ ನಿರತರಾಗಿದ್ದರು.