ಸಕಲೇಶಪುರ: ಕಾಡಾನೆ ದಾಳಿಯಿಂದಾಗಿ ತಾಲ್ಲೂಕಿನ ಹಾನುಬಾಳು ಹೋಬಳಿ ವ್ಯಾಪ್ತಿಯ ಬಿಳಿಸಾರೆ, ನೆಲಗಳಲೆ ಸುತ್ತುಮತ್ತಲಿನ ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಹಾಗೂ ಇತರ ಬೆಳೆ ನಾಶ ಪಡಿಸಿವೆ.
ಒಂದು ವಾರದಿಂದ ಸುತ್ತಮುತ್ತಲ ಹೊಡಚಹಳ್ಳಿ, ಅಗನಿ, ಅತ್ತಿಬೀಡು, ಮಕ್ಕಿಮನೆ ಗ್ರಾಮಗಳಲ್ಲಿ ಕಾಡಾನೆ ಅಡ್ಡಾಡಿ ಬೆಳೆ ಹಾನಿ ಮಾಡಿವೆ.
ಬಿಳಿಸಾರೆ ವಿನಯ್, ನಾರಾಯಣಗೌಡ, ಮಕ್ಕಿಮನೆ ರವಿಗೌಡ ಸೇರಿದಂತೆ ಹಲವು ಗ್ರಾಮಸ್ಥರ ಬೆಳೆ ಹಾನಿ ಮಾಡಿವೆ.