ಕೊಳ್ಳೇಗಾಲ: ತಾಲ್ಲೂಕಿನ ಚಿಲಕವಾಡಿ ಗ್ರಾಮದಲ್ಲಿ ಇರುವ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಶನಿವಾರ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಭೇಟಿ ನೀಡಿದರು.
ದೇವಸ್ಧಾನಕ್ಕೆ ಬಂದ ಸ್ವಾಮಿ ಅವರನ್ನು ಪೂರ್ಣ ಕುಂಭ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಯಿತು. ವಿಶೇಷ ಪೂಜೆ ಸಲ್ಲಿಸಿದ ಅವರು, ಭೇಟಿಯ ನೆನಪಿಗಾಗಿ ಗಿಡ ನೆಟ್ಟರು. ನಂತರ ಮೂಗೂರಿನ ತ್ರಿಪುರಸುಂದರಿ ದೇವಸ್ಧಾನಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮಿ, ಹೊನ್ನೂರು ಶಿವಕುಮಾರಸ್ವಾಮಿ, ಇಮಂಡಿ ಗುರುಲಿಂಗ ಸ್ವಾಮಿ ಇತರರು ಇದ್ದರು.