ಬಳ್ಳಾರಿ: ಐದು ತಿಂಗಳ ಬಾಕಿ ವೇತನ ನೀಡಬೇಕು ಎಂದು ಆಗ್ರಹಿಸಿ ಪಾಲಿಕೆಯ ಗುತ್ತಿಗೆ ಪೌರಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿ ಪಾಲಿಕೆ ಕಚೇರಿ ಮುಂದೆ ಸೋಮವಾರ ಸಮಾನತೆ ಯೂನಿಯನ್ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಧರಣಿ ನಡೆಸಿದರು.
ವೇತನ ನೀಡದಿರುವ ಕುರಿತು ಮೇಯರ್ ಜಿ.ವೆಂಕಟರಮಣ ಅವರೊಂದಿಗೆ ಗುತ್ತಿಗೆ ಪೌರಕಾರ್ಮಿಕರು ವಾಗ್ವಾದ ನಡೆಸಿದರು.
ಪೌರ ಕಾರ್ಮಿಕರು ಕಸವನ್ನು ಗುಡ್ಡೆ ಹಾಕಿ, ಕೈಯಲ್ಲಿ ಪೊರಕೆ ಹಿಡಿದು ಧರಣಿ ನಡೆಸಿದರು. ತಕ್ಷಣ ಬಾಕಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಮೇಯರ್ ಜಿ.ವೆಂಕಟರಮಣ ಅವರೊಂದಿಗೆ ಗುತ್ತಿಗೆ ಪೌರಕಾರ್ಮಿಕರ ವಾಗ್ವಾದ.