ಆಸ್ಪತ್ರೆಗೆ ಕ್ಯಾಂಟೀನ್, ವಾಹನ ನಿಲುಗಡೆ, ತುರ್ತು ವಾಹನ ಸೌಲಭ್ಯದ ಅಗತ್ಯವಿದೆ. ಹಾಗೆಯೇ ಈ ಭಾಗದಲ್ಲಿ ಅಪಘಾತಗಳಾದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವಾಗ ಜೀವ ಕಳೆದುಕೊಂಡ ಹಲವು ಉದಾಹರಣೆಗಳಿವೆ. ಅಪಘಾತ ಚಿಕಿತ್ಸಾ ಕೇಂದ್ರ ಆರಂಭಿಸುವ ಒತ್ತಾಯಕ್ಕೂ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ ಎಂಬುದು ಸ್ಥಳೀಯರ ದೂರು.