ಯಲಬುರ್ಗಾ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ತಲ್ಲೂರು ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಚಿತ್ರನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿ ನ.27ರಂದು ಬೆಳಿಗ್ಗೆ 10.30ಕ್ಕೆ ಬಾಗಿನ ಅರ್ಪಿಸಲಿದ್ದಾರೆ.
‘ಸುಮಾರು 96 ಎಕರೆ ವಿಸ್ತೀರ್ಣದ ಕೆರೆಯ ಅಭಿವೃದ್ಧಿಗೆ ಫೆ.28ರಂದು ಚಾಲನೆ ನೀಡಿದ್ದ ಯಶ್ ದಂಪತಿ ₹70 ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಕೆಲಸ ಮಾಡಿಸಿದ್ದರು. ಇದರ ಪರಿಣಾಮ ಸುತ್ತಲಿನ ಹತ್ತಾರು ಹಳ್ಳಿಗಳ ಕೊಳೆವೆಬಾವಿಗಳ ಅಂತರ್ಜಲ ಹೆಚ್ಚಾಗಿದೆ.
ಈಗ ಕೆರೆಯ ಅಂಗಳದಲ್ಲಿ ಪಕ್ಷಿಗಳ ಕಲರವ ಶುರುವಾಗಿದೆ. ಕೆರೆ ವೀಕ್ಷಿಸಲು ಸಾಕಷ್ಟು ಜನರು ಬರುತ್ತಿದ್ದಾರೆ’ ಎಂದು ಪ್ರಗತಿಪರ ರೈತ ರಮೇಶ ಬಳೂಟಗಿ ಹೇಳಿದರು.