‘ಅನೇಕ ದಿನಗಳಿಂದ ರಸ್ತೆ ಮಧ್ಯೆ ಬಾಯ್ತೆರೆದಿರುವ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಹತ್ತಿರ ಹೋದರೆ ಸಾಕು ಗಬ್ಬು ನಾರುತ್ತದೆ. ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಎಚ್ಚರಿಕೆಯಿಂದ ಓಡಾಡಬೇಕಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಪಾಲಿಕೆ ಅಧಿಕಾರಿಗಳು ಮತ್ತು ಕಾಮಗಾರಿ ನಡೆಸುತ್ತಿರುವ ಸಿಬ್ಬಂದಿ ಅದೇ ರಸ್ತೆಯಲ್ಲಿ ಓಡಾಡಿದರೂ ಅದರತ್ತ ಗಮನ ಹರಿಸಿ, ಸರಿ ಮಾಡಿಲ್ಲ. ತಕ್ಷಣ ಚರಂಡಿ ಕಾಮಗಾರಿ ಪೂರ್ಣಗೊಳಿಸಿ ನಾಗರಿಕರು ನಿಶ್ಚಿಂತೆಯಿಂದ ಓಡಾಡಲು ಅನುವು ಮಾಡಿಕೊಡಬೇಕು’ ಎಂದು ಗೋಕುಲ ರೋಡ್ ಬಸವೇಶ್ವರ ನಗರ ನಿವಾಸಿ ಸಾವಿತ್ರಿ ಪಾಟೀಲ ಒತ್ತಾಯ ಮಾಡಿದರು.