ಮೈಸೂರು: ಜಿಲ್ಲೆಯಲ್ಲಿ ನ. 29ರಿಂದ ಡಿ. 3ರವರೆಗೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಆದರೆ, ಮಳೆಯಾಗುವ ಸಾಧ್ಯತೆ ಇಲ್ಲ. ಹೀಗಾಗಿ, ರಾಗಿ ಹಾಗೂ ಭತ್ತದ ಕಟಾವು ಕೆಲಸವನ್ನು ಮುಂದುವರಿಸಬಹುದು. ಅಲ್ಲದೇ, ಕೋಳಿ ಹಾಗೂ ರೇಷ್ಮೆ ಸಾಕಣೆ ಕೇಂದ್ರದಲ್ಲಿ ಉಷ್ಣಾಂಶವನ್ನು ಕಾಪಾ ಡಿಕೊಳ್ಳಬೇಕು ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.