ಅಕ್ಕಿಆಲೂರ: ಶಾಡಗುಪ್ಪಿ ಗ್ರಾಮ ದಲ್ಲಿ ಆರ್ಥಿಕ ಸಮಸ್ಯೆಯಿಂದ ಸ್ಥಗಿತ ಗೊಂಡಿರುವ ಮಾಲತೇಶ ದೇವ ಸ್ಥಾನದ ಜೀರ್ಣೋದ್ಧಾರಕ್ಕಾಗಿ ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸ್ವತಃ ಪಾದಯಾತ್ರೆ ಮೂಲಕ ಮನೆ, ಮನೆಗೆ ತೆರಳಿ ವಂತಿಗೆ ಸಂಗ್ರಹಿಸುತ್ತಿದ್ದಾರೆ.
ಪ್ರತಿಯೊಂದು ಮನೆಗಳಿಗೂ ತೆರಳುತ್ತಿರುವ ಸ್ವಾಮೀಜಿ ಅಲ್ಲಿ ಪಾದಪೂಜೆ ಸ್ವೀಕರಿಸಿ ಜೀರ್ಣೋ ದ್ಧಾರಕ್ಕೆ ಅಗತ್ಯ ವಂತಿಗೆ ನೀಡುವಂತೆ ಭಕ್ತರಲ್ಲಿ ಕೋರುತ್ತಿದ್ದಾರೆ. ಕಳೆದ 3 ದಿನಗಳಿಂದ ಸ್ವಾಮೀಜಿ ಪಾದಯಾತ್ರೆ ನಡೆಸುತ್ತಿದ್ದಾರೆ.
* *
ಚಾರಿತ್ರ್ಯ ನಿರ್ಮಾಣದಲ್ಲಿ ದೇವಸ್ಥಾನಗಳು ಮುಖ್ಯ ಪಾತ್ರ ವಹಿಸುತ್ತವೆ. ಸಮಾಜಕ್ಕೆ ದೇವಸ್ಥಾನ ಕೇಂದ್ರ ಸ್ಥಾನ. ಅವುಗಳ ಜೀರ್ಣೋದ್ಧಾರ ನಮ್ಮೆಲ್ಲರ ಹೊಣೆ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ
ಮೂರುಸಾವಿರ ಮಠ, ಹುಬ್ಬಳ್ಳಿ