ಕನ್ಯಾನ ನಿವಾಸಿ, ನಿವೃತ್ತ ಯೋಧ ವೆಂಕಪ್ಪ ಮೂಲ್ಯ ಡಿ. (53) ಮೃತಪಟ್ಟವರು. ಮುಡಿಪು ಐಟಿ ಕಂಪೆನಿಯೊಂದರ ಭದ್ರತಾ ಸಿಬ್ಬಂದಿ ಯಾಗಿದ್ದ ಇವರು, ಬೈಕ್ ಮೂಲಕ ವಿಟ್ಲಕ್ಕೆ ತೆರಳುತ್ತಿದ್ದ ವೇಳೆ ಸರ್ಕಾರಿ ಬಸ್ ನಿಲ್ದಾಣದ ಪಕ್ಕದ ತಿರುವಿನಲ್ಲಿ ಮುಂಭಾ ಗದಿಂದ ಬಸ್ ಬಂದಿದ್ದರಿಂದ, ಬೈಕ್ ವೇಗ ಕಡಿಮೆ ಮಾಡಿದರು. ಹಿಂದಿನಿಂದ ಕೆಂಪು ಕಲ್ಲು ತುಂಬಿದ್ದ ಲಾರಿಯೊಂದು ಬಂದು ಬೈಕ್ಗೆ ಡಿಕ್ಕಿಯಾಗಿದೆ. ಲಾರಿಯ ಡಿಕ್ಕಿಯ ವೇಗಕ್ಕೆ ಬೈಕ್ ರಸ್ತೆಯ ಎಡಭಾ ಗಕ್ಕೆ ಬಿದ್ದಿದ್ದು, ಸವಾರ ಲಾರಿಯ ಮುಂಭಾಗದ ಚಕ್ರಕ್ಕೆ ಸಿಲುಕಿದ್ದಾರೆ.