ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಉಳಿಸಿ, ಬೆಳೆಸಲು ಸಲಹೆ

Last Updated 30 ನವೆಂಬರ್ 2017, 11:18 IST
ಅಕ್ಷರ ಗಾತ್ರ

ಶಕ್ತಿನಗರ: ‘ಕನ್ನಡ ಉಳಿಸುವ ಮತ್ತು ಬೆಳೆಸುವ ಕಾಯಕದಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳಬೇಕು’ ಎಂದು ಚಿಕ್ಕಸೂಗೂರು ಚೌಕಿ ಮಠದ ಡಾ. ಸಿದ್ಧಲಿಂಗಸ್ವಾಮಿ ತಿಳಿಸಿದರು.

ಚಿಕ್ಕಸೂಗೂರು ಗ್ರಾಮದಲ್ಲಿ ಈಚೆಗೆ ನಡೆದ ಗಡಿನಾಡು ಕನ್ನಡಿಗರ ಸಮಾವೇಶದಲ್ಲಿ ಅವರು ಮಾತನಾಡಿದರು. ಕನ್ನಡ ರಕ್ಷಣ ವೇದಿಕೆಯ (ನಾರಾಯಣಗೌಡ ಬಣ)ಜಿಲ್ಲಾ ಘಟಕದ ಅಧ್ಯಕ್ಷ ವಿನೋದರೆಡ್ಡಿ ಮಾತನಾಡಿ, ‘ಕನ್ನಡಿಗರು ರೈಲ್ವೆ ಇಲಾಖೆ ಹುದ್ದೆ ಪಡೆಯಲು ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ನಿರಂತರ ಹೋರಾಟದಿಂದ ಕನ್ನಡಿಗರು ಕನ್ನಡದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಿದೆ’ ಎಂದರು.

ಮುಖಂಡರಾದ ರವಿಬೋಸರಾಜು, ರಾಜಾರಾಯಪ್ಪನಾಯಕ, ಮಹಾಂತೇಶ ಪಾಟೀಲ ಅತ್ತನೂರು,ಶ್ರೀನಿವಾಸರೆಡ್ಡಿ, ನರಸಮ್ಮ ಶರಣಪ್ಪನಾಮಲಿ, ಬಸವರಾಜ ವಕೀಲ, ಅಂಬಯ್ಯಗೌಡ, ಚಂದ್ರಕಲಾಬಾಬು, ಯಶೋಧಮ್ಮ, ಲಕ್ಷ್ಮೀ ನರಸಪ್ಪ, ರಸೂಲ್‌ಸಾಬ್, ರಾಮಕೃಷ್ಣ,
ಯೂಸೂಫ್‌ಅಲಿ, ಚಿನ್ನಯ್ಯ, ಕೆ.ಲಕ್ಷ್ಮಣ, ಸಿದ್ಧನಗೌಡ, ಸುರೇಶಬಾಬು ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT