ದಾರಿಯುದ್ದಕ್ಕೂ ಭಕ್ತರು ತೆಂಗಿನ ಕಾಯಿ ಹೂ ಹಣ್ಣು ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಪುರಸಭೆ ಸದಸ್ಯ ಬಿ.ಗಂಗಾಧರ, ಮಾಲಾವೃಂದದ ಬಸವರಾಜ ಅಯ್ಯನಗೌಡರ, ಎಂ.ಪಿ.ಎಂ.ಮಂಜುನಾಥ, ಅಕ್ಕಿ ಮಲ್ಲಿಕಾರ್ಜುನ, ಕಿರಾಣಿ ಕೊಟ್ರೇಶ್,ಪ್ರಕಾಶ್, ಕೆ.ಕೆ.ಮಲ್ಲಿಕಾರ್ಜುನ, ಬಿ.ಎಂ.ಶಿವಶಂಕ್ರಯ್ಯ, ಎ.ಎಂ.ಕೊಟ್ರೇಶ್, ನರೇಗಲ್ ಹರ್ಷ, ಬಣಕಾರ ಗುರು ಬಸವರಾಜ, ಬಾಳೆಕಾಯಿ ಸಿದ್ದೇಶ, ಕಾಯಿಗಡ್ಡಿ ಕೊಟ್ರೇಶ್, ಪಿಗ್ಮಿ ಮಂಜುನಾಥ, ಜಾಲಿ ಅಶೋಕ್, ಗಂಗಾಧರ, ಪತ್ರಿಬಸವೇಶ್ವರ ಸೇವಾ ಸಮಿತಿಯ ಅಕ್ಕಿ ಬಸವರಾಜ, ಶಬಾದಿಬಸಪ್ಪ, ಪೂರ್ಣಯ್ಯ, ಪ್ರಧಾನ ಅರ್ಚಕ ಕೆ.ಕೆ.ಬಿ.ಎಂ.ಕೊಟ್ರಯ್ಯ ಇದ್ದರು. ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನಡೆಯಿತು.