ಆಂಧ್ರದ ಅನಂತಪುರ, ಕರ್ನೂಲು, ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ರಥೋತ್ಸವದ ಬಳಿಕ ಭಕ್ತರು ಮರಿಸ್ವಾಮಿಮಠದ ಆವರಣ ಮತ್ತು ದೇವಸ್ಥಾನದ ಸುತ್ತಮುತ್ತ ಜನರಿಗೆ ಅನ್ನಸಂತರ್ಪಣೆ ನಡೆಸಿದರು. ಜಾತ್ರೆಗೆ ಆಗಮಿಸಿದ ಜನರು ಮಿಠಾಯಿ, ಬಳೆ, ಮಕ್ಕಳ ಆಟಿಕೆ ಸಾಮಾನುಗಳ ಖರೀದಿಯ ಭರಾಟೆಯಲ್ಲಿ ತೊಡಗಿದ್ದರು.