ಅಕಾಲಿಕವಾಗಿ ಸುರಿದ ಮಳೆಯು ಭತ್ತ ಮತ್ತು ರಾಗಿ ಕೊಯ್ಲಿಗೆ ಅಡ್ಡಿಯಾಯಿತು. ಬೆಳೆದು ನಿಂತ ಪೈರನ್ನು ಅನೇಕರು ಕೊಯ್ಲು ಮಾಡುತ್ತಿದ್ದರು. ಮೊಡ ಕವಿದ ವಾತಾವರಣವಿದ್ದರೂ ಮಳೆ ಬರುವ ಸಾಧ್ಯತೆ ಕಡಿಮೆ ಎಂದು ರೈತರು ಅಂದಾಜಿಸಿದ್ದರು. ಆದರೆ, ಏಕಾಏಕಿ ಧರೆಗೆ ಇಳಿದ ವರುಣ ರೈತರಿಗೆ ಸಂಕಷ್ಟ ತಂದೊಡ್ಡಿತು. ಮಳೆಯೊಂದಿಗೆ ಬೀಸುವ ಬಿರು ಗಾಳಿಯು ಚಳಿಯನ್ನು ಹೆಚ್ಚಿಸಿದೆ. ಮೈನಡುಗುವ ಚಳಿಯಲ್ಲಿ ಮನೆಯಿಂದ ಹೊರಗೆ ಬರಲು ಅನೇಕರು ಹಿಂದೇಟು ಹಾಕಿದರು.