ಭತ್ತಕ್ಕೂ ಕುತ್ತು: ಜಿಲ್ಲೆಯಲ್ಲಿ ಸುಮಾರು 6 ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಕಟಾವಿನ ಹಂತದಲ್ಲಿ ಇರುವ ಬೆಳೆಗೂ ಚಂಡಮಾರುತ ಸಮಸ್ಯೆ ತಂದೊಡ್ಡಿದೆ. ಈಗಾಗಲೇ ಸೈನಿಕ ಹುಳುವಿನ ಬಾಧೆಯಿಂದ ತತ್ತರಿಸಿರುವ ಕೃಷಿಕರು ಈ ಮಳೆಯು ಸೃಷ್ಟಿಸಬಹುದಾದ ಅವಾಂತರದಿಂದ ಕಂಗಾಲಾಗಿದ್ದಾರೆ. ಕೊಯ್ಲು ನಡೆದಿರುವ ಕಡೆ ಬೆಳೆ ಕೊಳೆಯುವ ಭೀತಿ ಇದೆ. ಕೊಯ್ಲು ಮುಗಿದು ಹುಲ್ಲಿನ ಬಣವೆ ಹಾಕಲು ರೈತರು ಸಿದ್ಧತೆ ನಡೆಸಿದ್ದು, ಹುಲ್ಲು ಕೊಳೆಯುವ ಸಾಧ್ಯತೆ ಇದೆ.